April 26, 2017

ಬಾಳೆ ಎಲೆ ಊಟದ ಮಹತ್ವ

ಬಾಳೆಯೆಲೆಯಲ್ಲಿ ದಿನವೂ ಊಟಮಾಡುವುದರಿಂದ ಶೇ. ೬೦ ರಿಂದ ೭೦ ರಷ್ಟು ಚರ್ಮರೋಗಗಳಿಂದ ಮುಕ್ತಿಯನ್ನು ಪಡೆಯಬಹುದು. ಬಾಳೆ ಎಲೆಯನ್ನು ಬಿಸಿ ಮಾಡಿದಾಗ (ಬಿಸಿಯಾದ ಅನ್ನ ಸಾರನ್ನು ಹಾಕಿದಾಗ ಕೂಡ) ಹಲವು ಉಪಯುಕ್ತ ರಾಸಾಯನಿಕಗಳ ಉತ್ಪತ್ತಿಯಾಗುತ್ತವೆ. ಅವು ಹಲವು ಬಗೆಯ ಚರ್ಮರೋಗಗಳನ್ನು ವಾಸಿಮಾಡುವ ಶಕ್ತಿಯನ್ನು ಹೊಂದಿವೆ. ಪುತ್ತೂರು-ಕಾಸರಗೋಡು ಕಡೆ ನೀವು ಹೋದರೆ ಬಾಳೆ ಎಲೆಯನ್ನು ಬಿಸಿನೀರಿನಲ್ಲಿ ಹಾಕಿ ಬಾಡಿಸಿ ನಂತರ ಬಡಿಸುವ ಕ್ರಮ ಇರುವುದು ಇದೇ ಕಾರಣಕ್ಕೆ. ಊಟಮಾಡಿದ ಬಳಿಕ ಬಾಡಿದ ಎಲೆಯ ಮೇಲೆ "ಮಡೆಸ್ನಾನ" ಮಾಡುವುದೂ ಇದಕ್ಕೇನೆ. ಈ ವಿಚಾರ ಗೊತ್ತಿಲ್ಲದ "ಬುದ್ಧಿ ಜೀವಿಗಳು" ಸುಮ್ಮನೆ ಗುಲ್ಲೆಬ್ಬಿಸುತ್ತಾರೆ ಅಷ್ಟೇ. ಸಧ್ಯದಲ್ಲೇ ಇದನ್ನು ನಾವು ಆಧುನಿಕ ವಿಜ್ಞಾನ ರೀತ್ಯಾ ದೃಢೀಕರಿಸಲಿದ್ದೇವೆ.

No comments:

Post a Comment