May 19, 2015

ದತ್ತು ಕಾನೂನನ್ನು ಸಡಿಲಿಸಿ

ಭಾರತದಲ್ಲಿ "ದತ್ತು ಕಾನೂನು"ಗಳು ಎಷ್ಟು ಕ್ಲಿಷ್ಟವಾಗಿವೆ ಮತ್ತು ಗೋಜಲಿನಿಂದ ಕೂಡಿವೆ ಎಂದರೆ ಮಗುವನ್ನು ದತ್ತು ಪಡೆಯಬೇಕೆಂಬ ಆಸೆ ಇರುವ ಸಾವಿರಾರು ಜನರ ಕೈಗಳನ್ನು ಇವು ಕಟ್ಟಿ ಹಾಕಿವೆ. ಇತ್ತೀಚಿಗೆ ನಾನೊಂದು ಅನಾಥಾಶ್ರ.ಮಕ್ಕೆ ಭೇಟಿ ನೀಡಿದ್ದೆ



 ಅಲ್ಲಿನ ಮುಖ್ಯಸ್ಥರ ಮಾತಿನಲ್ಲಿ ಹೇಳುವುದಾದರೆ "ಈ ಕಾನೂನುಗಳನ್ನು ನೋಡಿ ಮಕ್ಕಳನ್ನು ದತ್ತು ಪಡೆಯಲು ಬಂದವರೂ ಹಿಂದೆ ಹೋಗುತ್ತಾರೆ". ಒಂದು ಉದಾಹರಣೆ ಹೇಳುವುದಾದರೆ, ದತ್ತು ಪಡೆಯುವವನು ತನ್ನ ಆಸ್ತಿಯ ಅರ್ಧ ಭಾಗ ಮಗುವಿನ ಹೆಸರಲ್ಲಿ ಬರೆಯಬೇಕಂತೆ! ಮಗುವನ್ನು ಹೊತ್ತು, ಸಾಕಿ, ಸಲಹಿ, ಶಿಕ್ಷಣ ನೀಡಿ ಅವನ ಕಾಲ ಮೇಲೆ ನಿಲ್ಲುವಂತೆ ಮಾಡುವುದು ತಂದೆ ತಾಯಿಯರ ಕರ್ತವ್ಯವಲ್ಲವೇ. ಇಲ್ಲಿ ಆಸ್ತಿ ಅಂತಸ್ತು ಗಳನ್ನು ಎಳೆದು ತರುವುದು ಸರ್ವಥಾ ಸಾಧುವಲ್ಲ. ಹೀಗೇ ಇದರಂತಹ ಇಪ್ಪತ್ತೈದು ಕಾಯಿದೆಗಳನ್ನು ಈ ದತ್ತು ಕಾನೂನಿನೊಳಗೆ ತೂರಲಾಗಿದೆ. ಇವುಗಳಿಂದ ರೋಸಿಹೊದವರಿಗಾಗಿ "ಸ್ಪೂರ್ತಿಧಾಮ" ಎಂಬ ಸಂಸ್ಥೆಯ ಪರಿಚಯವನ್ನು ಈ ಕೆಳಗೆ ನೀಡುತ್ತಿದ್ದೇನೆ. 

ನಿಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ (ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ ಇತ್ಯಾದಿ) ಇಲ್ಲಿನ ಮಕ್ಕಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬಹುದು. ವಿವರಗಳು ಈ ಕೆಳಗಿನಂತಿವೆ. 

ಈ ಸಂಸ್ಥೆಯ ಪೂರ್ಣ ವಿವರಗಳು ಈ ಕೆಳಗಿನ ಅಂತರ್ಜಾಲ ಪುಟಗಳಲ್ಲಿವೆ. 

http://spoorthi.org.in
https://www.facebook.com/spoorthidhama

"ಸೇವಾಹಿ ಪರಮೋ ಧರ್ಮಃ"