May 24, 2017

ಬಾಳೆಕುದ್ರು ಮಠದ ಶ್ರೀ ಅಣ್ಣಪ್ಪಸ್ವಾಮಿ ನಿರ್ಮಿತ ನ್ಯಾಯದಾನ ಯಂತ್ರ

ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಳಿಯ ಶ್ರೀ ಬಾಳೆಕುದ್ರು ಸಂಸ್ಥಾನದ "ಶ್ರೀಮಠ"ದಲ್ಲಿರುವ ಕುತೂಹಲಕಾರಿ ನ್ಯಾಯದಾನಯಂತ್ರದ ಸಂಕ್ಷಿಪ್ತ ಪರಿಚಯ ನೀಡುವ ಒಂದು ಸಣ್ಣ ಪ್ರಯತ್ನ ಇದಾಗಿದೆ. ಶ್ರೀಮಠವು ಅತ್ಯಂತ ಸುಂದರವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ಅತ್ಯಂತ ವಿಸ್ಮಯಕಾರೀ ಸಂಗತಿಗಳು ಹೊರಬರುತ್ತಿವೆ. ಈ ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಅಂತಹ ಒಂದು ವಿಸ್ಮಯವೇ ಈ ನ್ಯಾಯದಾನ ಯಂತ್ರ. ಇದನ್ನು ಸ್ಥಾಪಿಸಿದವರು ನಮ್ಮೆಲ್ಲರ ಪ್ರೀತಿಯ ಅಜ್ಜ ಶ್ರೀ ಅಣ್ಣಪ್ಪಸ್ವಾಮಿಯವರು. ಬಾಳೆಕುದ್ರು ಮಠ ಹಾಗೂ ಶ್ರೀ ಅಣ್ಣಪ್ಪಸ್ವಾಮಿಯ ಸಂಬಂಧಗಳ ಬಗ್ಗೆ ಈಗಲೇ ಈ ಬ್ಲಾಗಿನಲ್ಲಿ ಬರೆಯಲಾಗಿದೆ. ಅದನ್ನು ಈ ವಿಳಾಸದಲ್ಲಿ ಓದಬಹುದು 


ಬಾಳೆಕುದ್ರು ಮಠದ ನ್ಯಾಯದಾನ ಯಂತ್ರದ ಚಿತ್ರವನ್ನು ಇಲ್ಲಿ ನೀಡಲಾಗಿದೆ. 



​​
 ಎದುರಿಗೆ ಕಾಣುತ್ತಿರುವ ದ್ವಾರವೇ ನಾನು ಪ್ರಸ್ತಾಪಿಸುತ್ತಿರುವ ನ್ಯಾಯದಾನ ಯಂತ್ರ. ಇದರ ಮೂಲಕ ಹಾದು ಬರುವ ಪ್ರತಿಯೊಬ್ಬ ವ್ಯಕ್ತಿಯೂ ಸತ್ಯವನ್ನು ನುಡಿಯಲೇ ಬೇಕು. ಅಂತಹ ತಂತ್ರವನ್ನು ಶ್ರೀ ಅಣ್ಣಪ್ಪಯ್ಯನವರು ಈ ದ್ವಾರದಲ್ಲಿ ಅಳವಡಿಸಿದ್ದಾರೆ. ಇದರ ಮೂಲಕ ಸುಮಾರು ೨೩೦೦ ವರ್ಷಗಳಿಂದಲೂ ಶ್ರೀಮಠದಲ್ಲಿ ನ್ಯಾಯದಾನವು ಸುವ್ಯವಸ್ಥಿತವಾಗಿ ​ನಡೆದುಕೊಂಡು ಬಂದಿವೆ. ಸಾವಿರಾರು ಕ್ಲಿಷ್ಟ ಸಮಸ್ಯೆಗಳು ಪರಿಹಾರವನ್ನು ಕಂಡುಕೊಂಡಿವೆ, ಮಾತ್ರವಲ್ಲ ಇನ್ನೂ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಂದಿಗೂ ಈ ಪರಂಪರೆ ಉಳಿದು, ಬೆಳೆದು ಬಂದಿರುವುದು ಶ್ರೀಮಠದ ಹೆಗ್ಗಳಿಕೆ. 

ಸ್ವಸ್ತಿ ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳೀ ವಿರಾಜಮಾನರಾದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಭಾಗವತ ಪರಂಪರೆಯ ಶ್ರೀ ಬಾಳೆಕುದ್ರು ಸಂಸ್ಥಾನದ ಸಂಸ್ಥಾಪಕ ಶ್ರೀ ಶ್ರೀ ಶ್ರೀ ವರದಾಶ್ರಮ ಸ್ವಾಮಿಗಳ ಪರಂಪರೆಯ ಪ್ರವರ್ತಕ ಶ್ರೀಶ್ರೀಶ್ರೀ ನೃಸಿಂಹಾಶ್ರಮ ಸ್ವಾಮಿಗಳು ಸತ್ಯ, ನ್ಯಾಯ, ಧರ್ಮದ ಪ್ರತಿರೂಪವಾಗಿ ನಮ್ಮನ್ನು ಸಲಹುತ್ತಿರುವುದು ಸರ್ವವಿದಿತ. ಇನ್ನು ಶ್ರೀ ಅಣ್ಣಪ್ಪಯ್ಯನವರು ದೇಶದಾದ್ಯಂತ ಸಂಚರಿಸಿ ನ್ಯಾಯದಾನ ಯಂತ್ರಗಳನ್ನು ಸ್ಥಾಪಿಸಿರುವುದು ನಿಮಗೆ ಗೊತ್ತೇ ಇದೆ. ಇದರ ಕುರುಹುಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವುದು ಧರ್ಮಸ್ಥಳ, ಹಿರಿಯಡ್ಕ ಮತ್ತು ಮಾರಣಕಟ್ಟೆಗಳಲ್ಲಿ ಮಾತ್ರ ಎಂದು ನಾನು ತಿಳಿದಿದ್ದೆ. ಈಗ ಶ್ರೀಮಠದ ನ್ಯಾಯದಾನಯಂತ್ರವು (ಬಾಗಿಲು) ಬೆಳಕಿಗೆ ಬಂದು ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗೆ ಹೊಸ ಅವಕಾಶದ ಬಾಗಿಲನ್ನೇ ನಮಗಾಗಿ ತೆರೆದಿದೆ. ನಾವೆಲ್ಲರೂ ಕೋರ್ಟು ಕಛೇರಿ ಎಂದು ಹಣ, ಸಮಯ ಎರಡನ್ನೂ ವ್ಯರ್ಥ ಮಾಡುವ ಬದಲು ನಮ್ಮ ಹಿರಿಯರು ಕೊಟ್ಟಿರುವ ಇಂತಹ ಅಮೂಲ್ಯ ಯಂತ್ರಗಳ ಸಹಾಯದಿಂದ  ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳೋಣ. ಗುರುಗಳ ಸಾನ್ನಿಧ್ಯದಿಂದ ಪುನೀತರಾಗೋಣ. ವಂದೇ ಮಾತರಂ. 
  

1 comment:

  1. ನಮಸ್ತೆ,
    “ಕರ್ನಾಟಕದ ಸಂಸ್ಕೃತಿಕ ಚರಿತ್ರೆಯಲ್ಲಿ ಸ್ಥಾನಿಕರ ಚಾರಿತ್ರಿಕ ಮಹತ್ವ”, ಡಾ. ಕೆ. ಜಿ. ವಸಂತ ಮಾಧವರ ಈ ಪುಸ್ತಕ ನನಗೆ ಕಳುಹಿಸಬಹುದೇ?

    ReplyDelete